ವಾಸ್ತವ ಸತ್ಯ -ವೇದಿಕೆ,ಮಾತು
ವೇದಿಕೆ,ಮಾತು:
ವೇದಿಕೆಯು ದೊರಕಿದೊಡೆ ಮಾತನಾಡುವರಿಹರು,ವೇದಿಕೆಯ ಇಳಿದೊಡನೆ ನುಡಿದುದನು ಮರೆಯುವರು:
ನುಡಿದಂತೆ ನಡೆವವರು ಅಪರೂಪವಾಗಿಹರು, ಸಂಭಾವಿತರ ತೆರದಿ ವದನ ತೋರುವರಿಹರು:
ಮಾತು ಆಡಿದ ರೀತಿ ಬರೆಹದೊಳಗಿಹ ನೀತಿ,ಪಾಲಿಸುವ ಮಂದಿಗಳು ಜಗದಿ ಬಹಳಿಲ್ಲ:ಮಾತಿನ ಮಹತ್ವ, ಬರೆಹದೊಳಗಿಹ ಸತ್ವ, ಅರಿತು ನಡೆದರೆ ಸ್ತುತ್ಯ ,ಬದುಕು ಜಡವಲ್ಲ:
✍️ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ,,
Post a Comment